ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ
ಉಳಿಸಿರುವೆಯೋ ಕಾಣೆ, ದೇವಾ|
ನಿನ್ನದಯೆ ಇರಲಿ ಸದಾ ಹೀಗೆ
ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ
ನಮಿಸಿ ಸ್ಮರಿಸುತ್ತಿರುವೆ ಹೀಗೆ||

ಮತಿಗೆಟ್ಟು ನಾಲಿಗೆ ಎಡವಿ
ಮಹಾ ಪ್ರಮಾದವಾಗಿಬಿಡಹುದು|
ದೃಷ್ಟಿ ದೋಷ ಪೂರಿತನಾಗಿ ನಾ
ನಿಂದನೆಗಳಿಗೊಳಗಾಗಬಹುದು|
ದಿನ ನೂರು ಇಂಥ ಅಪರಾಧ
ಸಂಭವಿಸಿ ಬಿಡಬಹುದು, ಆದರೂ…||

ಚಂಚಲ ಮನಸ್ಸು
ಮನಬಂದಂತೆ ವರ್ತಿಸಿ
ಮಾನಾಪಮಾನವಾಗಬಹುದು|
ಚಪಲ ನಾಲಿಗೆ ಕಂಡದ್ದನ್ನೆಲ್ಲಾ
ಸವಿಯ ಬಯಸಿ ದೇಹ ಕೃಶವಾಗಬಹುದು|
ನಾ ಮುಂದೆಂಬ ವಿಪರೀತ ಬುದ್ಧಿ
ವಿಪತ್ತನ್ನೇ ತಂದಿಡಲುಬಹುದು|
ಕ್ಷಣಮಾತ್ರದಲಿ ಅವಘಡ
ಬಂದೆರಗಿ ಪ್ರಾಣಪಕ್ಷಿ
ಹಾರಿಬಿಡಬಹುದು, ಆದರೂ…||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟಿ ಸೂರ್ಯನಿಗೆ ಸಮನಾದ ‘ಪಿಸ್ಟಲ್’ ನಕ್ಷತ್ರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೦

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys